ಗುರುವಾರ, ನವೆಂಬರ್ 7, 2013

ಅನಂತ ಧನ್ಯವಾದಗಳು...


ನಾನು ಹುಟ್ಟಿದಾಗಿನಿಂದ ಇಂತಹದೊಂದು ಸಂಭ್ರಮದ ದೀಪಾವಳಿ ಆಚರಿಸಿಯೇ ಇರಲಿಲ್ಲ.
ಎಲ್ಲಿಯೋ ಹೇಳಹೆಸರಿಲ್ಲದೆ ಒಂದು ದಿನ ಈ ಭೂಮಿಯಿಂದ ಅಳಿಸಿ ಹೋಗಬೇಕಿದ್ದ ಇಂತೊಂದು
ಅಜ್ಞಾತ ಕವಿಯು ಈವತ್ತು ಚೊಚ್ಚಲ ಕವನ ಸಂಕಲನದ ಭಾಗ್ಯ ಕಾಣುವುದು, ಜೊತೆಗೆ
ಹಲವು ದಿಗ್ಗಜರ ಜೊತೆ ವೇದಿಕೆ ಹಂಚಿಕೊಳ್ಳುವುದೂ ಎನ್ನುವುದು
ಯಾವುದೋ ಜನ್ಮದ ಪುಣ್ಯ ಫಲವೇ ಸರೀ.

ಇಂತಹ ಒಂದು ಪುಸ್ತಕವನ್ನಾಗಲಿ - ನೆನಪಿನಲ್ಲಿ ಉಳಿಯುವಂತಹ
ಅಮೋಘ ಕಾರ್ಯಕ್ರಮವನ್ನಾಗಲಿ ರೂಪಿಸುವುದು
ಯಾವತ್ತಿಗೂ ನನಗೇ ಸ್ವತಃ ಕೈಗೂಡುತ್ತಿರಲಿಲ್ಲ.
ಇದು ನನ್ನ ಬ್ಲಾಗಿಗರ ಕೊಡುಗೆ.
 

ಮನೆಯಲ್ಲಿ ದೀಪಾವಳಿ ಹಬ್ಬದ ಸಡಗರ ಮತ್ತು ಕಾರ್ಯದ ಒತ್ತಡಗಳಿದ್ದರೂ
ಆಗಮಿಸಿ ತುಂಬಿದ ಸಭಾಂಗಣವಾಗಿಸಿದ ನನ್ನ ನಿಜ ಪ್ರೋತ್ಸಾಹಕರಿಗೂ
ನಾನು ನಿಜವಾಗಲೂ ಆಭಾರಿ.
ದೀಪಾವಳಿಯ ಸಾರ್ಥಕ ಕ್ಷಣಗಳು
ಎಲ್ಲೋ ಗವಿಯಲ್ಲಿದ್ದ ಈ ಅಜ್ಞಾತ ಕವಿಯನ್ನು ಗುರುತಿಸಿ ಬೆಳಕಿಗೆ ತಂದ ಮುಂಬೈನ  ಕುಶಿ ಪ್ರಕಾಶನದ ಶ್ರೀಯುತ. ಅಶೋಕ್ ಶೆಟ್ಟಿಯವರಿಗೆ ನಾನು ಬದುಕಿನ ಪೂರಾ ಚಿರರುಣಿ.
ಮುಂಬೈನ ಕುಶಿ ಪ್ರಕಾಶನದ ಅಶೋಕ್. ವಿ. ಶೆಟ್ಟಿ ಕೊಡ್ಲಾಡಿ 
ಇಲ್ಲೊಂದು ವಿಶೇಷ ಗಮನಿಸಿರಿ:
ಪ್ರಕಾಶಕರು "ಕುಶಿ" - ನಮ್ಮ ಮನೆಯ ದೀಪ - ಶ್ರೀಯುತ ಅಶೋಕ್ ವಿ. ಶೆಟ್ಟಿ ಕೊಡ್ಲಾಡಿ, ಕಾರ್ಯಕ್ರಮದ ಆಯೋಜಕರು ಇಟ್ಟಿಗೆ ಸಿಮೆಂಟು - ಖ್ಯಾತಿಯ ಶ್ರೀ. ಪ್ರಕಾಶ್ ಹೆಗ್ಡೆ, ಕವನ ಬರೆದವರು ಬದರಿನಾಥ ಪಳವಳ್ಳಿಯ ಸಮಗ್ರ, ಮುನ್ನುಡಿ ಬರೆದವರು ಸಲ್ಲಾಪ
- ಶ್ರೀ. ಸುನಾಥ್ ಸಾರ್, ಮುಖ ಪುಟ ರಚಿಸಿಕೊಟ್ಟವರು ಮೃದುಮನಸು - ಶ್ರೀಮತಿ. ಸುಗುಣ ಮಹೇಶ್ ಮತ್ತು ಬೆನ್ನುಡಿ ಬರೆದುಕೊಟ್ಟವರು ಕುವೈತಿನಲ್ಲಿ ನೆಲೆಸಿರುವ ಕನ್ನಡಿಗ ಜಲನಯನ - ಶ್ರೀಯುತ. ಆಜಾದ್ ಸಾರ್, ಕಾರ್ಯಕ್ರಮದ ಅಧಿಕೃತ ಛಾಯಾಗ್ರಾಹಕರುಗಳಾದ ಶ್ರೀ. ಪ್ರಕಾಶ್ ಹೆಗ್ಡೆ - ಛಾಯಾ ಚಿತ್ತಾರಾ..  , ಶ್ರೀಯುತ. ಬಾಲಣ್ಣ - ನಿಮ್ಮೊಳಗೊಬ್ಬ ಬಾಲು, ಶ್ರೀಯುತ. ಶ್ರೀಕಾಂತ್ ಮಂಜುನಾಥ್ - ಪಾಯಿಂಟ್ ಪಂಚರಂಗಿ ಎಲ್ಲವೂ ಬ್ಲಾಗರುಗಳೇ!!!
ದಿನಾಂಕ 3.11.2013 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ  ಶ್ರೀಯುತರಾದ. ಸುನಾಥ್ ಸಾರ್, ನನ್ನನ್ನು ಬ್ಲಾಗ್ ಲೋಕಕ್ಕೆ ವಿಸ್ತಾರವಾಗಿ ಪರಿಚಯಿಸಿದ ಮೂಕ ಮನದ ಮಾತು.....! ಬ್ಲಾಗಿಗ ಶ್ರೀಯುತ.  ದಿನಕರ್ ಮೊಗೇರಾ ಸಾರ್, ದೇಶಪಾಂಡೆ ಸಾರ್ ಅವರ ಪುಸ್ತಕಗಳ ಜೊತೆ ನನ್ನ ಚೊಚ್ಚಲ ಕವನ ಸಂಕಲನ "ಪಾತ್ರ ಅನ್ವೇಷಣಾ" ಕವನ ಸಂಕಲನ ಬಿಡುಗಡೆಯಾಯಿತು.
ನನ್ನನ್ನು ಬ್ಲಾಗಿಗರಾಗಿಸಿದ ಶ್ರೀಯುತ. ದಿನಕರ್ ಮೊಗೇರ ಮತ್ತು
ನನ್ನ ಗುರುವರ್ಯ ಶ್ರೀಯುತ. ಸುನಾಥ್ ಸಾರ್ ಅವರ ಪುಸ್ತಕಗಳ ಜೊತೆ.
 
ಎಲ್ಲೋ ಗವಿಯಲ್ಲಿದ್ದ ಈ ಅಜ್ಞಾತ ಕವಿಯನ್ನು ಗುರುತಿಸಿ ಬೆಳಕಿಗೆ ತಂದ ಮುಂಬೈನ  ಕುಶಿ ಪ್ರಕಾಶನದ ಶ್ರೀಯುತ. ಅಶೋಕ್ ಶೆಟ್ಟಿಯವರ ಬಗ್ಗೆ ನಮ್ಮ ಪ್ರಕಾಶ್ ಹೆಗ್ಡೆ ಹೀಗೆ ಹೇಳುತ್ತಾ ಕಾರ್ಯಕ್ರಮಕ್ಕೆ ಆಹ್ವಾನಿಸುವ ಪೋಸ್ಟ್ ಹಾಕಿದ್ದರು:
"ನಮಗಾಗಿ ನಾವು ಏನೆಲ್ಲ ಮಾಡುತ್ತೇವೆ... !

ನಮಗಾಗಿ..
ನಮಗೊಂದು ಹೆಸರಿಗಾಗಿ...
ಹಣಕ್ಕಾಗಿ.. ಸಂತೋಷಕ್ಕಾಗಿ...

ನಾನು..
ನನ್ನದು... ನನಗೆ ಮಾತ್ರ...

ಇಂಥಹ ..
ಸ್ವಾರ್ಥದ ವಾತಾವರಣದಲ್ಲಿ ಇಲ್ಲೊಬ್ಬ ಅಪವಾದವಾಗಿ ಇದ್ದಾರೆ...

" ಗೆಳೆಯ ಅಶೋಕ್ ಶೆಟ್ಟಿ " ...

ಪ್ರತಿಭಾವಂತ ಕವಿ..
ಬದರಿನಾಥ ಫಲವಳ್ಳಿಯವರ ಕವನ ಸಂಕಲವನ್ನು..
ತಮ್ಮ ಖರ್ಚಿನಲ್ಲಿ "ಕುಶಿ" ಪ್ರಕಾಶನದಲ್ಲಿ ಹೊರ ತರುತ್ತಿದ್ದಾರೆ...

ಕವನ ಸಂಕಲನವನ್ನು ಯಾರೂ ಖರಿದಿಸುವದಿಲ್ಲ...
ಹಾಗಾಗಿ
ಯಾವ ಪ್ರಕಾಶಕರೂ ಕವನ ಸಂಕಲನವೆಂದರೆ ದೂರವಿರುತ್ತಾರೆ..
ತಮ್ಮ ಖರ್ಚಿನಲ್ಲಿ ಬದರಿಯವರ ಕವನ ಪುಸ್ತಕವನ್ನು ಅಶೋಕ್ ಪ್ರಕಟಿಸುತ್ತಿದ್ದಾರೆ..

ಇನ್ನೊಬ್ಬರ ಕನಸನ್ನು ನನಸುಮಾಡುವದರಲ್ಲಿ...
ಮತ್ತೊಬ್ಬರ ಒಳಿತಿನಲ್ಲಿ...
ಸಂತೋಷದಲ್ಲಿ ..
ಸಂಭ್ರಮದಲ್ಲಿ ಖುಷಿಯನ್ನು ಕಾಣುವದುದಿದೆಯಲ್ಲ ..
ಇಂದಿನ ದಿನಗಳಲ್ಲಿ
ಇದು ಬಹಳ ದೊಡ್ಡ ಸಂಗತಿ...

ಯಾರು ಈ ಅಶೋಕ್ ಶೆಟ್ಟಿ....
ಯಾರು ಬದರಿನಾಥ ಫಲವಳ್ಳಿ...?
ಏನಿದು ಬಾಂಧವ್ಯ ?

ಅಶೋಕ್ ಇರುವದು ಮುಂಬೈ ನಗರದಲ್ಲಿ..
ಬದರಿನಾಥ ಫಲವಳ್ಳಿ ಇರುವದು ಬೆಂಗಳೂರಲ್ಲಿ...

ಬದರಿ ಮತ್ತು ಅಶೋಕ್ ಅಂತರ್ಜಾಲ ಸ್ನೇಹಿತರು ಅಷ್ಟೆ....
ಬ್ಲಾಗ್ ಸ್ನೇಹಿತರು...

ಎಲ್ಲವನ್ನೂ..
ಲಾಭ.. ನಷ್ಟದ ಲೆಕ್ಕಾಚಾರ ಹಾಕುವ ಇಂದಿನ ಕಾಲದಲ್ಲಿ...
ಅಶೋಕ್ ಬೇರೆಯಾಗಿಯೇ ಕಾಣುತ್ತಾರೆ...

ಅಶೋಕ್ ಹಾಗೂ.. ಬದರಿನಾಥರ ಗೆಳೆತನ ಕಂಡು ಹೃದಯ ತುಂಬಿ ಬರುತ್ತದೆ...

ಒಳ್ಳೆಯತನವನ್ನು...
ಅಪಹಾಸ್ಯ ಮಾಡುವ..
ಇಂದಿನ ಈ ಕಾಲದಲ್ಲಿ..
ಅಶೋಕ್ ರಂತವರು ಹೊಸ ಭರವಸೆ.. ಆಸೆ ಮೂಡಿಸುತ್ತಾರೆ...

ನಾವು..
ಮೂರನೇ ತಾರಿಖಿನಂದು ಅಶೋಕರನ್ನು ಭೇಟಿಯಾಗಿ..
ಅವರ ಹೃದಯ ಶ್ರೀಮಂತಿಕೆಯನ್ನು ಅಭಿನಂದಿಸುವ ಅವಕಾಶವನ್ನು ಬಿಡಬಾರದು...

ಜೈ ಹೋ !!!!
"
ನಮ್ಮ ಕಿರು ಸನ್ಮಾನಗಳಿಗೆ ಒಪ್ಪಿದ ಮುದ್ದೇನಹಳ್ಳಿ ಸತ್ಯ ಸಾಯಿ ಶಾಲೆಯ ನನ್ನ ಉಪಾಧ್ಯಾಯರಾದ
ಶ್ರೀಯುತ. ನಾಗಶಂಕರ ಶರ್ಮ ಮೇಸ್ಟ್ರು
ಕಾರ್ಯಕ್ರಮದ ರೂವಾರಿ  ಶ್ರೀಯುತ. ಪ್ರಕಾಶ್  ಹೆಗ್ಡೆ ಸಾರ್
ಬೆನ್ನುಡಿ ಬರೆದು ನನಗಾಗಿ ಕುವೈತಿನಿಂದ ಕಾರ್ಯಕ್ರಮಕ್ಕೆ ಬಂದು ಸ್ವಾಗತ ಭಾಷಣ ಮಾಡಿದ ಶ್ರೀಯುತ. ಆಜಾದ್ ಸಾರ್
ನನ್ನ ಕವನ ಸಂಕಲನಕ್ಕೆ ಮುನ್ನುಡಿ ಬರೆದುಕೊಟ್ಟ ಗುರುವರ್ಯ ಶ್ರೀಯುತ. ಸುನಾಥ್ ಸಾರ್.
ಕವನ ಸಂಕಲನದ cover page ಅತ್ಯಮೋಘವಾಗಿ design ಮಾಡಿದ ಶ್ರೀಮತಿ. ಸುಗುಣ ಮಹೇಶ್ ಮೇಡಂ

ನನ್ನ ಕವನಗಳ ಬಗ್ಗೆ ಮೆಚ್ಚಿ ಅತ್ಯುತ್ತಮ ಭಾಷಣ ಮಾಡಿದ ಸುವರ್ಣ ಸುದ್ದಿ ವಾಹಿನಿಯ ಪ್ರಧಾನ ಛಾಯಾಗ್ರಾಹಕ. 
ಶ್ರೀಯುತ. ಸತ್ಯ ಬೋಧ ಜೋಶಿಜೀ
ನನ್ನ ಕವನಗಳ ಬಗ್ಗೆ ಮೆಚ್ಚಿ ಮಾತನಾಡಿದ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಮೇಡಂ
ಅತ್ಯುತ್ತಮವಾಗಿ ನಿರೂಪಣೆ ನಡೆಸಿಕೊಟ್ಟ ಶ್ರೀಮತಿ. ಕುಮುದವಲ್ಲಿಯವರು 
ಮುಖ್ಯ ಅತಿಥಿಗಳಾದ ಶ್ರೀಯುತ. ಜಿ. ಎನ್. ಮೋಹನ್ ಸಾರ್
ಪ್ರಾರ್ಥನಾ ಗೀತೆ ಹಾಡಿದ ಶ್ರೀಮತಿ. ಉಷಾ ಉಮೇಶ್ ಅವರು
ತಮ್ಮ ಹಾಡಿನಿಂದ ನಮ್ಮೆಲ್ಲರ ಮನಗೆದ್ದ ಕೊಳಲು ಬ್ಲಾಗಿನ ಡಾ|| ಡಿ.ಟಿ.ಕೆ. ಮೂರ್ತಿ ಅವರು.
(
ಮೂರು ವರ್ಷಗಳ ಕೆಳಗೆ, ನನ್ನ ಬ್ಲಾಗಿಗೆ ಓದುಗರೇ ಬರುತ್ತಿರಲಿಲ್ಲ. ಬಹುಶಃ ಮೊದಲ 15 ಪೋಸ್ಟುಗಳಿಗೆ ಓದುಗರೇ ಇಲ್ಲದೆ commentಗಳು ಸೊನ್ನೆ ಸೊನ್ನೆ. ನಾನು ಬ್ಲಾಗಿಂದ ವಿಮುಖನಾಗಿ ಅಲ್ಲಿ ಕವನ ಹಾಕುವುದೇ ಬಿಟ್ಟಿದ್ದೆ. ಅಂತಹ ಶೂನ್ಯ ಸಂಪಾದನೆ ಸಮಯದಲ್ಲಿ, ಬ್ಲಾಗುಗಳ ಸರಳ ಸೂತ್ರವಾದ 'ನಿಮ್ಮದು ನಾನು ಓದುತ್ತೇನೆ ಗೆಳೆಯ - ನನ್ನದೂ ತುಸು ಓದಿ' ಎನ್ನುವ golden rule ಹೇಳಿಕೊಟ್ಟವರು ಇದೇ ನನ್ನ 'ಅಪ್ಪಾಜಿ' ಕಿವಿ ಮೂಗು ಗಂಟಲು ತಜ್ಞ, ಕಾರ್ಗಲ್ KPCL ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಈಗ ವಿಶ್ರಾಂತ ಜೀವನದ ಮೊದಲ ಮಜಲು ಸವಿಯುತ್ತಿರುವ ಕೊಳಲು ಬ್ಲಾಗಿನ ರೋಚಕ ಹಿರಿಯ ಬರಹಗಾರ, ಅವರ ಒಲುಮೆ ಈವತ್ತಿಗೂ ದ್ವಿಗುಣಿತ ಅಗಣಿತವೇ.)
ತುಂಬಿದ ನಯನಸಭಾಂಗಣ 
3K ಬಳಗದ ಶತಮಾನಂಭವತಿ ಕವನ ಸಂಕಲನದಲ್ಲಿ ನನಗೂ ಜಾಗ ಕೊಟ್ಟ
ರೂಪಾ ಸತೀಶ್ ಅವರು
ಸಮಯೋಚಿತ ವಂದನಾರ್ಪಣೆ ನಡೆಸಿಕೊಟ್ಟ ಶ್ರೀಯುತ. ಉಮೇಶ್ ದೇಸಾಯಿಯವರು.
ಬ್ಲಾಗ್ ಲೋಕ, face book, 3K - ಕನ್ನಡ ಕವಿತೆ ಕವನ, ಕನ್ನಡ ಬ್ಲಾಗ್ ಪದಾರ್ಥ ಚಿಂತಾಮಣಿ, ಸ್ನೇಹ ಲೋಕ ಗುಂಪಿನ ಗೆಳಯ ಗೆಳತಿಯರಿಗೂ ನಾನು ಅನಂತ ಕೃತಜ್ಞ.

ನಿನ್ನ ಪ್ರೀತಿಗೆ, ಅದರ ರೀತಿಗೆ
ಕಣ್ಣ ಹನಿಗಳೆ ಕಾಣಿಕೆ ?

  - ಕೆ ಎಸ್ ನರಸಿಂಹಸ್ವಾಮಿ

ಇಡೀ ಕಾರ್ಯಕ್ರಮದ ಅಮೋಘ ಚಿತ್ರಗಳು ಇಲ್ಲಿವೆ (ಅವರ ಚಿತ್ರದ ಶೀರ್ಷಿಕೆ ಮೇಲೆ ಕ್ಲಿಕ್ಕಿಸಿ ಸಾಕು) stillಉಗಳ ವರ್ಷವನ್ನೇ ಹರಿಸಿದ್ದಾರೆ
ಪ್ರಕಾಶ್ ಹೆಗ್ಡೆ
ಮೈಸೂರು ಬಾಲಣ್ಣ 
ಶ್ರೀಕಾಂತ್ ಮಂಜುನಾಥ್
ಇನ್ನು ಈ ಚೊಚ್ಚಲ ಕೂಸು ನಿಮ್ಮ ಕೈಸೇರಲಿ ನಮ್ಮ ಪ್ರಕಾಶಕರಿಗೂ ಆರ್ಥಿಕ ಯಶಸ್ಸು ಕಾಣುವಂತಾಗಲಿ. 
-:ಪ್ರತಿಗಳಿಗಾಗಿ : ಅಶೋಕ್ ಅವರನ್ನಾಗಲಿ, ನನ್ನನ್ನಾಗಲೀ ಸಂಪರ್ಕಿಸಬಹುದು.:-
ಗೆಳೆಯ ಶ್ರೀ. ಪ್ರಮೋದ್ ಶ್ರೀನಿವಾಸ್ ಅವರಿಗೂ ವಂದನೆಗಳು

21 ಕಾಮೆಂಟ್‌ಗಳು:

  1. ಸೂಪರ್ ಸರ್... ನಿಮ್ಮ ಪ್ರತಿಭಾವಂತ ಕವಿತೆಗಳನ್ನ ಹೊರತಂದಿರುವುದು ನಿಜಕ್ಕೂ ನಮಗೆಲ್ಲಾ ಖುಷಿ. ಮತ್ತೊಂದು ಪುಸ್ತಕ ಆದಷ್ಟು ಬೇಗ ಬರಲಿ ಶುಭವಾಗಲಿ

    ಪ್ರತ್ಯುತ್ತರಅಳಿಸಿ
  2. ಅತ್ಯುತ್ತಮ.... ಶುಭವಾಗಲಿ BP ಅವ್ರೆ...... ಎಲ್ಲರೂ ಬ್ಲಾಗಿಗರಿಲ್ಲಿ ಅನ್ನುವುದು ನಿಜಕ್ಕೂ ಸ೦ತಸದ ವಿಷಯ.

    ಪ್ರತ್ಯುತ್ತರಅಳಿಸಿ
  3. ಬದರಿ ಸರ್;ನಿಮ್ಮ ಬಗ್ಗೆ ಹೇಳಿದ್ದೆಲ್ಲಾ ಹೇಳಿ ಮುಗಿಸಿ ನನ್ನ ಪದ ಭಂಡಾರ ಖಾಲಿ!!! ಆದರೆ ಮನಸು ಖುಷಿಯಿಂದ ತುಂಬಿ ತುಳುಕುತ್ತಿದೆ!!! ದೇವರು ನಿಮ್ಮಿಂದ ಇನ್ನಷ್ಟು ಸುಂದರ ಕವನಗಳನ್ನು ಬರೆಸಲಿ.ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  4. ಏನೆಂದು ನಾ ಹೇಳಲಿ. ಬರವಣಿಗೆಯಲೆ ಮೋಡಿ ಮಾಡಿ ಜನ ಮನ ತಣಿಸುವ ಬ್ಲಾಗ್ ಲೋಕದ ದಿಗ್ಗಜ ಬದರಿ ಸರ್. ಬಹು ನಿರೀಕ್ಷೆಯ ಮೊದಲ ಕವನಗಳ ಗೊಂಚಲು ಹೊರಬಂದಿದೆ. ಇನ್ನೊಂದಕ್ಕೆ ಕಾಲ ಬೇಗ ಕೂಡಿಬರಲಿ ಎಂದು ಆಶಿಸುತ್ತೇನೆ. ಮಂಗಳವಾಗಲಿ.

    Thanks for sharing all pics. :)

    ಪ್ರತ್ಯುತ್ತರಅಳಿಸಿ
  5. ಸುಂದರ ಅತೀ ಸುಂದರವಾಗಿತ್ತು ಈ ಕಾರ್ಯಕ್ರಮ... ಎಲ್ಲರೂ ಬಹಳ ಸಂತೋಷಪಟ್ಟೆವು... ಬ್ಲಾಗ್ ಹಾಗು ಮುಖಪುಸ್ತಕದ ಸ್ನೇಹಿತರೆಲ್ಲರೂ ಸೇರಿ ಸಂಭ್ರಮಿಸಿದ ದೀಪಾವಳಿ, ನಗೆಪಟಾಕಿಗಳು ಬೇಜಾನ್ ಸಿಡಿದ್ವು... ಹೊಸ ಮುಖಗಳ ಪರಿಚಯವಾಯ್ತು... ಕಾರ್ಯಕ್ರಮ ಸಫಲ! super duper hit! ಎಲ್ಲರಿಗೂ ಧನ್ಯವದಗಳು

    ಪ್ರತ್ಯುತ್ತರಅಳಿಸಿ
  6. ಆತ್ಮೀಯ ಬದರಿ ಸರ್ ನಿಮ್ಮ ಪುಸ್ತಕ ಬಿಡುಗಡೆಯ ಮೂಲಕ ನಮ್ಮ ದೀಪಾವಳಿ ಹಬ್ಬ ಸಾರ್ಥಕ ಆದ ಅನುಭವ ಆಯ್ತು........ ಅತ್ಯುತ್ತಮ ಪುಸ್ತಕ ಬರೆದಿರುವುದಕ್ಕೆ ಅಭಿನಂಧನೆಗಳು ಶುಭವಾಗಲಿ

    ಪ್ರತ್ಯುತ್ತರಅಳಿಸಿ
  7. ಅಮೋಘ ; ಆಹ್ಲಾದಕರ ವಾಗಿತ್ತು. ಅಭಿನಂಧನೆಗಳು Badri ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  8. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  9. ನಿಮ್ಮಂತಹ ಕವಿಯ ಅದ್ಭುತ ಕವಿತೆಗಳನ್ನು ಪ್ರಕಟಿಸಿ ಶ್ರೀ ಅಶೋಕ ಶೆಟ್ಟಿ ಯವರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ, ಬ್ಲಾಗ್ ಮಿತ್ರರೆಲ್ಲರಿಗೂ ಬದರಿ ಎಂಬ ಮುದ್ದು ಮಗುವಿನ ಬಗ್ಗೆ ಚೆನ್ನಾಗಿ ಗೊತ್ತಿದೆ, ಬಹಳ ಬಾವುಕರಾಗಿ ನಿಮ್ಮ ಪ್ರತಿಭೆಯನ್ನು ಕೀಳರಿಮೆಗೆ ಒಳಗಾಗಿಸಬೇಡಿ , ನಿಮ್ಮಿಂದ ಇನ್ನೂ ಬಹಳ ಒಳ್ಳೆಯ ಕವಿತೆಗಳ ರಚನೆ ಆಗಬೇಕಾಗಿದೆ, ನಾವು ಗೆಳೆಯರು ಕಂಡ ಒಬ್ಬ ಅದ್ಭುತ ಕವಿ ನೀವಾಗಿದ್ದೀರಿ, ಮೊದಲನೇ ಸಿಕ್ಸರ್ ಹೊದೆದಾಯಿತು, ಮತ್ತೊಮ್ಮೆ ಸಿಕ್ಸರ್ ಹೊಡೆಯಲು ಸಿದ್ದರಾಗಿ, ನಿಮಗೆ ಒಳಿತಾಗಲಿ

    ಪ್ರತ್ಯುತ್ತರಅಳಿಸಿ
  10. ಚಿನ್ನ ಭೂಗರ್ಭದಲ್ಲಿದ್ದರು ಅದಕ್ಕೆ ಚಿನ್ನದ ಬೆಲೆಯೇ.. ಅಕ್ಕಸಾಲಿಗನತ್ತ ಒರೆ ಹಚ್ಚಿಸಿಕೊಂಡರು ಅದು ಚಿನ್ನವೇ.. ಒಳಗಿದ್ದಾಗಲೂ ಕೊರಗದೆ ಹೊರಗೆ ಬಂದಾಗಲೂ ಹಿಗ್ಗದೆ ಇರುವ ಚಿನ್ನದಂತೆ ನೀವು ಬದರಿ ಸರ್.. ರೈಲು ನಿಲ್ದಾಣದಲ್ಲಿ ಮಾತ್ರ ಇರಲು ಮಾಡಿರೋದಿಲ್ಲ.. ಆದರೆ ಅದು ಹೊರಡಬೇಕಾದರೆ ಗಾರ್ಡ್ ಹಸಿರು ಬಾವುಟ ತೋರಿಸಬೇಕು.. ನೀವು ಹಾಗೆಯೇ ನಿಮ್ಮ ಕವನದ ರೈಲು ಬಂಡಿಗೆ ಅಶೋಕ್ ಸರ್ ಹಸಿರು ನಿಶಾನೆ ತೋರಿಸಿದ್ದಾರೆ.. ರೈಲಿಗೆ ಇನ್ನು ಕೀಳರಿಮೆ ಇರುವುದಿಲ್ಲ.. ಅದು ಪಟ್ಟಿಯ ಮೇಲೆ ಚಲಿಸುತ್ತಾ ಸಾಗುತ್ತಿರುತ್ತದೆ..
    ಗೆಳೆತನಕೆ ಹೊಸ ಭಾಷ್ಯ ಬರೆದ ಅಶೋಕ್ ಸರ್ ಮತ್ತು ಬದರಿ ಸರ್ ಸ್ನೇಹಕ್ಕೆ ಒಂದು ಜೈ.. ಶುಭವಾಗಲಿ ಮಂಗಳಮಯವಾಗಲಿ

    ಪ್ರತ್ಯುತ್ತರಅಳಿಸಿ
  11. ಚಂದದ ಭಾವಗಳ ಸಮ್ಮಿಲನ ...
    ಹೀಗೊಂದು ಧನ್ಯವಾದವ ಮನ ತುಂಬಿ ಹೇಳೋ ನಿಮಗೊಂದು ನಮನ ಬದರಿ ಸರ್..
    ನಿಜ..ನಮ್ಮಗಳ ಪುಸ್ತಕ ಬಿಡುಗಡೆ ಇದ್ರೂ ನಾವಷ್ಟು ಖುಷಿ ಪಡ್ತಿರಲಿಲ್ಲವೇನೋ .ಅಷ್ಟು ಖುಷಿ ಆಯ್ತು ಆತ್ಮೀಯ ಬ್ಲಾಗಿಗರೊಂದಿಗಿನ ಆ ದೀಪಾವಳಿ .
    ಇರಲಿರಲಿ ಈ ಸ್ನೇಹ ಚಿರಕಾಲ ಹೀಗೇ

    ಪ್ರತ್ಯುತ್ತರಅಳಿಸಿ
  12. ಸಮಾರ೦ಭದಲ್ಲಿ ಸ್ವತಃ ಭಾಗವಹಿಸಿದ ಅನುಭವವಾಯ್ತು ಬದರಿ ಸರ್, ಮತ್ತೊಮ್ಮೆ ಅಭಿನ೦ದನೆಗಳು. ನಿಮ್ಮ ಅದ್ಭುತ ಕವನಗಳನ್ನು ಬ್ಲಾಗ್ ನಲ್ಲಿ ಓದಿದ್ದೇನೆ. ಪುಸ್ತಕದಲ್ಲೂ ಓದಲು ಅವಕಾಶ ಮಾಡಿಕೊಡಿ. ನಿಮ್ಮದೊ0ದು ಪುಸ್ತಕವನ್ನು ದಯಮಾಡಿ ಕಳುಹಿಸಿಕೊಡಿ. ನನ್ನ ಬ್ಲಾಗ್ ಗೂ ಭೇಟಿಕೊಡಿ.

    ಪ್ರತ್ಯುತ್ತರಅಳಿಸಿ
  13. ನಮಸ್ತೆ ಬದರೀ ನಾಥ್, ಸ್ವಾಮಿ ವಿವೇಕಾನಂದ ರಥಯಾತ್ರೆಯ ಓಡಾಟದಲ್ಲಿ ಒಂದು ಮುದನೀಡುವ ಕಾರ್ಯಕ್ರಮದ ಸುದ್ಧಿಯನ್ನೂ ಪಡೆಯಲಾಗಲಿಲ್ಲ.ಏನೇ ಆಗಲೀ ಚಿತ್ರಸುದ್ಧಿಯನ್ನು ನೋಡಿ ಮನತುಂಬಿಬಂದಿದೆ. ಖುಷಿಯಾಯ್ತು.ಶುಭವಾಗಲಿ

    ಪ್ರತ್ಯುತ್ತರಅಳಿಸಿ
  14. ಈ ಸಾರಿ ದೀಪಾವಳಿ ಹಬ್ಬಕ್ಕೆ ಎರಡೆರಡು ಸಂತೋಷ.. ಮೊದಲನೆಯದು ನಿಮ್ಮ ಕವನಗಳ ಪುಸ್ತಕ ಬಂದದ್ದು .. ಎರಡನೆಯದ್ದು ಬಹಳ ದಿನದ ನಂತರ ಹಲವು ಸ್ನೇಹಿತರನ್ನ ಮುಖತಃ ಭೇಟಿ ಆದದ್ದು. ಎರಡಕ್ಕೂ ಮೂಲ ಕಾರಣ ನೀವು & ಅಶೋಕಣ್ಣ. ಬಹಳ ಕಾಲ ನೆನಪಿನಲ್ಲುಳಿಯುವಂಥ ದೀಪಾವಳಿಯಾಗಿ ಮಾಡಿದಿರಿ ಈ ಹಬ್ಬವನ್ನ ಧನ್ಯವಾದಗಳು. :)

    ಪ್ರತ್ಯುತ್ತರಅಳಿಸಿ
  15. ಸ್ವಲ್ಪ ಓಡಿಸಿ ಓದಿದೆ. ಎಲ್ಲವೂ ಚೆನ್ನಾಗಿದೆ. ಕೆಲವೊಮ್ಮೆ ಮನದಾಳದ ಮಾತುಗಳು ಕವಿತೆ ಗಳಾಗಿ ಹೊರ ಬರುತ್ತವೆ. ನಿಮ್ಮ ಕವನಗಳಲ್ಲಿ ನಿಜ ಜೀವನದ ಎಲ್ಲಾ ಆಗುಹೋಗುಗಳ ಚಿತ್ರಣವಿದೆ. ಎಲ್ಲವೂ ಸುಂದರ .. ಅದ್ಭುತ..
    ವಾಹಿನಿಯಲ್ಲಿ ದ್ರಶ್ಯಸೆರೆಹಿಡಿಯೋ ನಿಮ್ಮ ಕೆಮರಾತರಹ .
    ನಿಜಜೀವನದ ಚಿತ್ರ ಸೆರೆಹಿಡಿದಿದೆ ನಿಮ್ಮ ಬರಹ.

    ಪ್ರತ್ಯುತ್ತರಅಳಿಸಿ
  16. badari bhaiyya: naanu niha kaLLara tara bandu haage karyakrama mugida takshaNa horaTu bandvi.(ondu photodalli niha kaaNistiddaaLe nODi) eStondu jana sEriddu nODi sakhath khushiyaaytu.
    heege innaSTu chendada kavitegaLannu bareyiri
    :-)
    malathi S

    ಪ್ರತ್ಯುತ್ತರಅಳಿಸಿ
  17. badari bhaiyya: naanu niha kaLLara tara bandu haage karyakrama mugida takshaNa horaTu bandvi.(ondu photodalli niha kaaNistiddaaLe nODi) eStondu jana sEriddu nODi sakhath khushiyaaytu.
    heege innaSTu chendada kavitegaLannu bareyiri
    :-)
    malathi S

    ಪ್ರತ್ಯುತ್ತರಅಳಿಸಿ