ಕೊನೆಯ ಹನಿಯವರೆಗೂ
ಬಸಿಯುವುದು ಗೊತ್ತಿದ್ದವನೇ
ಕುಡುಕ!
ಸುರಿದ ಪೈಸೆಗಳ ಲೆಕ್ಕ
ನಿಶೆಯಲೇ ಅಂತ್ಯವಾದಾರೆ
ಸಾಕು ಅವನಿಗದೇ ಚುಕ್ತ
ಬಸಿಯುವುದು ಯಾರಿಗಿಲ್ಲ ಜಗದಿ
ಅದೇ ಅವನ ಮೂಲ ಪ್ರಶ್ನೆ
ನೌಕರಿಯೂ ಹಿಂಡದೇ ಹೇಳಿ?
ಸ್ವಂತ ಸಂಸಾರವೂ ಕೆಲವೊಮ್ಮೆ
ನಕ್ಕಳು ಗೆಳತಿ ಗಲಾಸಿನಾಕಾರದಲ್ಲಿ
ಹೆಂಡ ಕುಡಿವುದೇ ತಪ್ಪೇ
ವಿಲಾಯತಿ ಬೇಕೆ ನಾತ ಶುದ್ಧಿಗೆ?
ತೂರಾಡುವುದೇ ಧ್ಯೇಯ ಕಡೆಗೆ,
ಮನೆಯಲೇ ಪಾನೋತ್ಸವ
ಬಯಲಾಗದು ಸತ್ಯ ನೆರಮನೆಗೆ!
ಮೊದಲ ಸಿಪ್ಪಿಗೂ ಮುನ್ನ
ಭಯಗ್ರಸ್ತ ತಳಮಳ ಒಳಗೆ
ಕರುಳು ಸುಟ್ಟೀತೆ ಎಂಬಿತ್ಯಾದಿ,
ಇಳಿದಂತೆ ಒಳಗೆ ಮಗಾ
ಯಾವನಾ ಸೀ.ಎಂಊ ಈಗ?
ಅಸಲು ನೀರಿನದೇ ತಪ್ಪು
ವಿಸ್ಕಿಗಾದರೂ ಅದೇ ರಮ್ಮಿಗಾದರೂ ಅದೇ
ಮಿಳಿತ ಮನದೆನ್ನೆಯಂತೆ,
ಅಮಲಿನಸಲು ಹಾಟಲ್ಲವೇ ಅಲ್ಲ
ಗ್ಯಾರಂಟಿ ಅದು ನಲ್ಲಿ ನೀರೇ!
ಶಿಳ್ಳೆ ಹೊಡೆದವರೂ ನೀವೇ
ಶರಾಬೀ ಸ್ಟಾರು ಬಚ್ಚನ್ನಿಗೆ
ಸುಮ್ಮನೆ ಬೈಯುತ್ತೀರಿ ನಮಗೆ!
(ಚಿತ್ರಕೃಪೆ: ಅಂತರ್ಜಾಲ)
(ಬಾರ್ ಅಂಡ್ ರೆಸ್ಟೋರೆಂಟುಗಳಲ್ಲಿ ಕುಡಿದ ಕವಿಯೊಬ್ಬ ಲಹರಿಗೆ ಬಿದ್ದು ಕೈ ಒರೆಸಿಕೊಳ್ಳಲು ಕೊಟ್ಟ ನ್ಯಾಪ್ಕಿನ್ - ಟಿಷ್ಯೂ ಪೇಪರ್ರಿನ ಮೇಲೆ ಬರೆದ ಕವಿತೆ)
ಬಸಿಯುವುದು ಗೊತ್ತಿದ್ದವನೇ
ಕುಡುಕ!
ಸುರಿದ ಪೈಸೆಗಳ ಲೆಕ್ಕ
ನಿಶೆಯಲೇ ಅಂತ್ಯವಾದಾರೆ
ಸಾಕು ಅವನಿಗದೇ ಚುಕ್ತ
ಬಸಿಯುವುದು ಯಾರಿಗಿಲ್ಲ ಜಗದಿ
ಅದೇ ಅವನ ಮೂಲ ಪ್ರಶ್ನೆ
ನೌಕರಿಯೂ ಹಿಂಡದೇ ಹೇಳಿ?
ಸ್ವಂತ ಸಂಸಾರವೂ ಕೆಲವೊಮ್ಮೆ
ನಕ್ಕಳು ಗೆಳತಿ ಗಲಾಸಿನಾಕಾರದಲ್ಲಿ
ಹೆಂಡ ಕುಡಿವುದೇ ತಪ್ಪೇ
ವಿಲಾಯತಿ ಬೇಕೆ ನಾತ ಶುದ್ಧಿಗೆ?
ತೂರಾಡುವುದೇ ಧ್ಯೇಯ ಕಡೆಗೆ,
ಮನೆಯಲೇ ಪಾನೋತ್ಸವ
ಬಯಲಾಗದು ಸತ್ಯ ನೆರಮನೆಗೆ!
ಮೊದಲ ಸಿಪ್ಪಿಗೂ ಮುನ್ನ
ಭಯಗ್ರಸ್ತ ತಳಮಳ ಒಳಗೆ
ಕರುಳು ಸುಟ್ಟೀತೆ ಎಂಬಿತ್ಯಾದಿ,
ಇಳಿದಂತೆ ಒಳಗೆ ಮಗಾ
ಯಾವನಾ ಸೀ.ಎಂಊ ಈಗ?
ಅಸಲು ನೀರಿನದೇ ತಪ್ಪು
ವಿಸ್ಕಿಗಾದರೂ ಅದೇ ರಮ್ಮಿಗಾದರೂ ಅದೇ
ಮಿಳಿತ ಮನದೆನ್ನೆಯಂತೆ,
ಅಮಲಿನಸಲು ಹಾಟಲ್ಲವೇ ಅಲ್ಲ
ಗ್ಯಾರಂಟಿ ಅದು ನಲ್ಲಿ ನೀರೇ!
ಶಿಳ್ಳೆ ಹೊಡೆದವರೂ ನೀವೇ
ಶರಾಬೀ ಸ್ಟಾರು ಬಚ್ಚನ್ನಿಗೆ
ಸುಮ್ಮನೆ ಬೈಯುತ್ತೀರಿ ನಮಗೆ!
(ಚಿತ್ರಕೃಪೆ: ಅಂತರ್ಜಾಲ)
(ಬಾರ್ ಅಂಡ್ ರೆಸ್ಟೋರೆಂಟುಗಳಲ್ಲಿ ಕುಡಿದ ಕವಿಯೊಬ್ಬ ಲಹರಿಗೆ ಬಿದ್ದು ಕೈ ಒರೆಸಿಕೊಳ್ಳಲು ಕೊಟ್ಟ ನ್ಯಾಪ್ಕಿನ್ - ಟಿಷ್ಯೂ ಪೇಪರ್ರಿನ ಮೇಲೆ ಬರೆದ ಕವಿತೆ)
:-)
ಪ್ರತ್ಯುತ್ತರಅಳಿಸಿಕೊನೆಯ ಹನಿಯವರೆಗೂ
ಬಸಿಯುವುದು ಗೊತ್ತಿದ್ದವನೇ
ಕುಡುಕ! :-)
ಅಮಲಿನಸಲು ಹಾಟಲ್ಲವೇ ಅಲ್ಲ
ಗ್ಯಾರಂಟಿ ಅದು ನಲ್ಲಿ ನೀರೇ!
:-(
ಸರ್ ನಮ್ಮಲ್ಲಿ ನಲ್ಲಿ ನೀರಿನ ಬಣ್ಣ ಕೂಡ ವಿಸ್ಕಿ ಕಲರ್ರೆ!! ಏನ್ ಮಾಡೋದು ಹೇಳಿ
ಸೂಪರ್ ಕವಿತೆ
ಕುಡಿಯೋರಿಗೆ ಗೊತ್ತು ಅದರ ಮಜಾ ಮತ್ತೆ ಸಜಾ
ಮೊದಲ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಮೇಡಂ, ನಿಮ್ಮ ಮಾತು ನಿಜ, ನಮ್ಮ ಊರಿನ ನಲ್ಲಿ ನೀರೂ ರಮ್ಮಿನ ಕಲ್ಲರೇ. ನಿಮ್ಮ ಅಭಿಮಾನಕ್ಕೆ ಶರಣು.
ಅಳಿಸಿಮನದೆನ್ನೆಯಂತೆ ಅಮಲಿನಸಲು ಹಾಟಲ್ಲವೇ ಅಲ್ಲ
ಪ್ರತ್ಯುತ್ತರಅಳಿಸಿಗ್ಯಾರಂಟಿ ಅದು ನಲ್ಲಿ ನೀರೇ!
accepted n revealed beautifully..
ಮೇಡಂ, ನಿಮ್ಮ ಸಾಲುಗಳು ಎಷ್ಟು ಕಾವ್ಯಾತ್ಮಕವಾಗಿತ್ತೆಂದರೆ ಓದಿ ಹೇಳಿದ ಮೇಲೆ ನನ್ನ ಮಾಡದಿಯೂ ಖುಷ್. ನಿಮಗೆ ನನ್ನ ಅನಂತ ಧನ್ಯವಾದಗಳು.
ಅಳಿಸಿಕುಡಿಯದವರಿಗೂ ಮತ್ತೆರುವುದು ಖಚಿತ...
ಪ್ರತ್ಯುತ್ತರಅಳಿಸಿಅಮಲು.. ಓದಿದವರಿಗದು ಉಚಿತ..
ನಾನೂ ಕೂಡಾ ಈಗ ಪಾನಮತ್ತ..
ನಿಮ್ಮ ಕವನ ಸತ್ಯಾಂಶಗಳ ಸುತ್ತ..
ಬದರೀ ಸಾರ್.. ನಾನು ಫುಲ್ ಟೈಟ್.. :D :D
ಹೋಕ್ಕಳ್ಳಿ ಬುಡಿ ಬುದ್ದಿ, ಕಾಸೇ ಖರ್ಚ್ ಮಾಡಿಸದೆ ನಿಮಗೆ ಟೈಟ್ ಮಾಡಿಸಿದ ನನ್ನ ಕವಿತೆಗೆ ನನ್ನ ಶರಣು.
ಅಳಿಸಿಧನ್ಯವಾದಗಳು
ಅಳಿಸಿಬದರಿನಾಥರೆ,
ಪ್ರತ್ಯುತ್ತರಅಳಿಸಿCheers to you!!!
ಧನ್ಯನಾದೇನು ಗುರುಗಳೇ.
ಅಳಿಸಿಕುಡಿತದ ಭಾರಿ ಸತ್ಯಗಳು, ಒಳ್ಳೆಯ ಚಿತ್ರಣ. ಕೊನೆಯ ಹನಿಯವರೆಗೂ ಬಸಿಯುವುದು ಗೊತ್ತಿದ್ದವನೇ
ಪ್ರತ್ಯುತ್ತರಅಳಿಸಿ" ಕುಡುಕ "
ಅಲ್ಲವ್ರ ಮತ್ತೆ? ಓದಿದ ನಿಮಗೂ ನನ್ನ ಸಲಾಮುಗಳು.
ಅಳಿಸಿಚನ್ನಾಗಿದೆ ಸಾರ್
ಪ್ರತ್ಯುತ್ತರಅಳಿಸಿಕುಡುಕನ ಸಮರ್ತನಾ ವಿಶ್ಲೇಷಣೆ ಸೂಪರ್ :)
ಪ್ರತ್ಯುತ್ತರಅಳಿಸಿಥ್ಯಾಂಕ್ಯು ಭರತಮುನಿಗಳೇ! ತಮಗೂ ಅಭ್ಯಾಸವಿದೆಯೋ?
ಅಳಿಸಿಕುಡುಕನ ಮ್ಯಾಲೂ ಬರೀತಿರಲ್ರಿಪಾ
ಪ್ರತ್ಯುತ್ತರಅಳಿಸಿಛೆ ಛೆ ಅಮಾಯಕರು ಅವರು...!!
ಹಂಗಲ್ಲ ಸಾರ್, ಕುಡುಕ ಅಮಾಯಕ, ಮದಿರೆ ನಿರ್ವಾಹಕಿ. ಬರ್ರೆಲ ಪ್ರಯೋಗ ಮಾಡಿ ನೋಡೋಣವಂತೆ ಎನಂತೀರಿ ಉಮೇಶಣ್ಣ?
ಅಳಿಸಿ"ಶಿಳ್ಳೆ ಹೊದೆಯುವವರೂ ನೀವೇ ಶರಾಬಿ ಸಾರ್ ಬಚ್ಚನ್ನ್ನಿಗೆ,ನಮ್ಮನ್ನು ಸುಮ್ಮನೇ ಬೈಯುತ್ತೀರಿ !!! ".ಬದರಿ ,ನಿಮ್ಮ ಕವಿತಾ ಶಕ್ತಿಗೆ ಏನೆನ್ನೋಣ !!! ಎಲ್ಲಿಂದ ಎಲ್ಲಿಗೇ ಹೋಗುತ್ತೆ ಸ್ವಾಮಿ ನಿಮ್ಮ ಲಹರಿ !!! ನಿಮ್ಮ ಕಲ್ಪನಾ ಶಕ್ತಿಗೆ ನನ್ನದೊಂದು hats off !!! ನಿಮ್ಮಲ್ಲಿನ ಆ ದೈವಿಕ ಶಕ್ತಿಗೆ ನಮೋನ್ನಮಃ !!
ಪ್ರತ್ಯುತ್ತರಅಳಿಸಿ'ಅಂತಾ ರಾಮಾಮಯಮ್' ಅನ್ನುತ್ತಾನೆ ಭಕ್ತ ರಾಮದಾಸ. 'ಅಂತಾ ರಮ್ಮುಮಯಂ' ಅನ್ನುತ್ತಾನೆ ಅಲ್ವಾ ಮದಿರೆ ದಾಸ?
ಅಳಿಸಿಎನಂತೀರಿ ಕೊಳಲು ಸಾ?
ಕವಿತೆಯಲ್ಲಿ ನಶೆ ಚೆನ್ನಾಗಿ ಬೆರೆತಿದೆ.. ಓದಿದಷ್ಟೂ ಅಮಲು.. waaah..
ಪ್ರತ್ಯುತ್ತರಅಳಿಸಿಧನ್ಯವಾದಗಳು ಮೇಡಂ
ಅಳಿಸಿಯಪ್ಪಾ ಬದರಿ....!!!
ಪ್ರತ್ಯುತ್ತರಅಳಿಸಿಯಾವುದೋ ಸಿನಿಮಾ ಡೈಲಾಗು ನೆನ್ಪಾಯ್ತು,,,
೬೦-೬೫ ವರ್ಷದ ಮುದುಕಿ ಹೇಳ್ತಾಳೆ
"ನಾನು ದಿನಾ ನೈನ್ಟಿ ಹಾಕ್ಕೊಳ್ದೇ ಮಲಗಿದ್ದೇ ಇಲ್ಲ...ಅದು ಹಾಕ್ಕೊಂಡು ಮಲಗೋದೋ ಒಂದು ಮಜಾ"
ಮೇಲಿನ ಸಾಲಲ್ಲಿ ನೈನ್ಟಿ=ನೈಟಿ ...ಅಷ್ಟೇ ಮಾರ್ಪಾಡು...
ಕೊನೆಯ ಹನಿಯ ಕಥೆ ಕುಡ್ಕನಿಗೆ ಗೊತ್ತಿರೊಲ್ಲ ಆದರೆ ಅಂತಹ ಸ್ನೇಹಿತನ್ನ ಮನೆಗೆ ಡ್ರಾಪ್ ಮಾಡೋ ನನ್ನಂತಹ ಟೀ ಟೋಟಲ್ಲರ್ ಗೆ ನೆನಪು ತುಂಬಾ...
ಒಮ್ಮೆ ಒಬ್ಬನ್ನ (ಟೈಟಾಗಿದ್ದ ಆಗ್ಲೇ) ರೂಮಿಗೆ ಬಿಟ್ಟೆ ಮಂಚದ ಮೇಲೆ ಮಲಗಿಸಿದೆ ಖಾತ್ರಿ ಆಯ್ತು ಮಲಗಿದ ಅಂತ..ಹೊರಟೆ ಮನೆಗೆ.
ಬೆಳಿಗ್ಗೆ ಸ್ವಲ್ಪ ಚಿಂತೆ ಆಯ್ತು. ಯಾಕಂದ್ರೆ ತುಂಬಾನೆ ಕುಡಿದಿದ್ದ ರಾತ್ರಿ,,, ಎದ್ದು ಬೇಗ ಹೋಗಿ ನೋಡ್ತೀನಿ ಕಾಣ್ಲಿಲ್ಲ ಆಸಾಮಿ..!!!ಎಲ್ಲಾ ಕಡೆ ಹುಡುಕ್ದೆ..ಕೊನೆಗೆ ಟಾಯ್ಲೆಟ್ ಬಾಗಿಲಲ್ಲಿ ಬಿದ್ದಿದ್ದನ್ನ ನೋಡಿ..ನೀರು ಚಲ್ಲಿದೆ.
ಸದ್ಯಕ್ಕೆ ಎಚ್ಚರ ಆಯ್ತು ಅವನಿಗೆ ಕೇಳಿದೆ..ಏನೋ ಕತೆ ನಿಂದು ? ಅಂತ..
ನನ್ನ ಕೈಯಲ್ಲೇ ಯಾಕೋ ಬಿಟ್ಟೆ ಬಾಟ್ಲು..? ಅಂದ
ಅದು ಖಾಲಿಯಾಗಿತ್ತಲ್ಲೋ..ಅಂದೆ
ಊಂ ಕಣೋ ..ಆದ್ರೆ ನೀನು ಬಿಟ್ಟಮೇಲೆ ಸ್ವಲ್ಪ ಹಿತ್ಗೆ ಎಚ್ಚರ ಆಯ್ತು, ಬಾಟ್ಲು ಬಗ್ಗಿಸ್ದೆ ಮೂರ್ನಾಲ್ಕು ತೊಟ್ಟು ಸಿಕ್ತು, ಏರಿಸ್ಕಂಡೆ...ಸುಸು ಬಂತು..ಬಂದು ಮಾಡಿ ಔಟ್ ಆಗ್ಬುಟ್ಟೆ ಇಲ್ಲೇ ಅನ್ಸುತ್ತೆ..
ಇದು-ಕೊನೆ ಹನಿಗಳ ಮಹಾತ್ಮೆ...!!!!
ನೈನ್ಟಿ=ನೈಟಿ ಆಹಾ ಆಜಾಡಣ್ಣ ಭಲೇ ಭಲೇ. ಒಳ್ಳೆಯ ಕಾಮೆಂಟು ನನ್ನ ಪುಕ್ಕಕ್ಕೆ...
ಅಳಿಸಿಧನ್ಯವಾದಗಳು ಸಾರ್. :)
ಕುಡಿತದೊಳಗಿನ ಸತ್ಯಗಳು... ಸಾಲುಗಳಾಗಿ ಮೂಡಿಬಂದಿವೆ. ಕುಡಿತ ಎಷ್ಟೋ ಮನೆ ಮನಸ್ಸುಗಳನ್ನು ಹಾಳು ಮಾಡಿವೆ.
ಪ್ರತ್ಯುತ್ತರಅಳಿಸಿನಿಮ್ಮ ಮಾತು ನಿಜ ಕುಡಿತ ಎಷ್ಟೋ ಮನೆ ಮನಸ್ಸುಗಳನ್ನು ಹಾಳು ಮಾಡಿವೆ ಸುಗುಣ ಅವರೇ, ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಮತ್ತಿನಿಂದ. ಒಳ್ಳೆಯ ಮಾತಿಗೆ ಧನ್ಯವಾದಗಳು ನಿಮಗೆ.
ಅಳಿಸಿ"ಮೊದಲ ಸಿಪ್ಪಿಗೂ ಮುನ್ನ
ಪ್ರತ್ಯುತ್ತರಅಳಿಸಿಭಯಗ್ರಸ್ತ ತಳಮಳ ಒಳಗೆ
ಕರುಳು ಸುಟ್ಟೀತೆ ಎಂಬಿತ್ಯಾದಿ,
ಇಳಿದಂತೆ ಒಳಗೆ ಮಗಾ
ಯಾವನಾ ಸೀ.ಎಂಊ ಈಗ?"
ಮಧ್ಯೆ ಮಧ್ಯೆ ಮದ್ಯ ಇಳಿದಾಗ ಕಿಕ್ಕೂ
ನಿಶೆಯಲ್ಲಿ ಅಕ್ಷರಗಳ ಮಧ್ಯೆ ಇಣುಕಿದಾಗ ಸಿಕ್ಕಿದ್ದು ಕಿಕ್ಕೂ
ಬ್ಯಾಗಲ್ಲಿದ್ದ ಕಾಗದ ತೆಗೆದು ಗೀಚಿದೆ ಅಲ್ಲೂ ಸಿಕ್ತು ಕಿಕ್ಕೂ
ತೂರಾಡುತ್ತಾ ಹೋದೆ ಮನೆಗೆ ಬಾಗಿಲ ತೆಗೆದ ಮಡದಿ ಕೊಟ್ಟಿದ್ದು ...... ?
ಹ ಹ ಹ ಹ ನಾನು ಹೇಳೋಳಪ್ಪಾ!!!
Super badari Sir!
ನನ್ನ ಕವಿತೆಯನ್ನು ಮೆಚ್ಚಿ ನೀವು ಬರೆದುಕೊಟ್ಟ ಸಾಲುಗಳು ಶ್ರೀಮಾನ್ ನಿಜವಾಗಲೂ ಮಹಾನ್. ಹುರ್ರೇ ಹುರ್ರೇ ಒಳ್ಳೆಯ ಕಾಮೆಂಟು ನಿಮ್ಮದು.
ಅಳಿಸಿಕನ್ನಡದ "ಜಂಗ್ಲಿ" ಚಿತ್ರದ ರಂಗಾಯಣ ರಘು ಡೈಲಾಗ್ "ಬಾಟಲು ಹಿಂಡೋ " ನೆನಪಾಯ್ತು!! :-) super!!
ಪ್ರತ್ಯುತ್ತರಅಳಿಸಿಬಾಟಲು ಹಿಂಡೋ ಪ್ರಯತ್ನ ಯಾವಾಗ ಮಾಡೋಣ ಸಂತೋಷೂ...? :-D
ಅಳಿಸಿEn helbeko gottaagtilla sir. yavattoo kudidilla....aadre nimma kavana odi idoo sadhyana? anta annistide. Nisheloo chennag bardiddeera andre nivobba maahaan...............:P kavikaney irbeku annistu.
ಪ್ರತ್ಯುತ್ತರಅಳಿಸಿNicely written.
Kusuma
:-P ಮೇಡಂ, ನಿಶೆಯಲ್ಲಿ ಬರೆದದ್ದು ಖಂಡಿತ ಅಲ್ಲವೇ ಅಲ್ಲ HRD ರಮ್ಮಿನ ಆಣೆಗೂ! ಕುಡಿದರೆ ಹಿಂಗುರುತ್ತೇ ಅಂತ ಕಲ್ಪನೆ ಮಾಡಿಕೊಂಡಷ್ಟೇ ಬರೆದೆ. ನಿಮಗೆ ಇಷ್ಟವಾದದ್ದು ನನಗೆ ಖುಷಿಕೊಟ್ಟಿತು.
ಅಳಿಸಿಕವಿಯ ನಶೆ ಕವಿತೆಯಾಗಿ ಓದುಗರನ್ನು ಆವರಿಸುತ್ತಿದೆ. ಅಮಲು, ಅಮಲಾ, ಅಮಲ ಗಂಗಾ ಎಲ್ಲದಕ್ಕೂ ಸಲ್ಲುವ ಕವಿತೆ ಬರೆಯುವ ನಿಮಗೆ ಶರಣು
ಪ್ರತ್ಯುತ್ತರಅಳಿಸಿಅಮಲು, ಅಮಲಾ, ಅಮಲ ಗಂಗಾ ಮೂರಕ್ಕೂ ಸಲ್ಲುವ ಕವಿಯಾದರೆ ನನ್ನ ಬದುಕು ಸಾರ್ಥಕ. ನಿಮ್ಮ ಒಲುಮೆಗೆ ಇದೋ ನನ್ನ ಸಲಾಮುಗಳು.
ಅಳಿಸಿಇಳಿದಂತೆ ಒಳಗೆ ಮಗಾ
ಪ್ರತ್ಯುತ್ತರಅಳಿಸಿಯಾವನಾ ಸೀ.ಎಂಊ ಈಗ?.eshto jana kudida mele ee dialogue hodeyodu nodiddini...
Kudidaaga satya horage baruttanthe Badari sir... any how cheers !!!
cheers ಕಣಪ್ಪ... ನನ್ನ ಕವಿತೆ ನಿಮಗೆ ಇಷ್ಟವಾದದ್ದು ನನಗೆ ಸಂತಸ ತಂದಿತು ಗೆಳೆಯ.
ಅಳಿಸಿSuper Kavana sir!
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿತುಂಬ ವಿಚಿತ್ರ ಅಲ್ವಾ ? ಅಲ್ಲಿನ ಅನುಭವ ಬ್ಲಾಗಿನಲ್ಲಿ ಬರಿ...ಅಬದರಿ ಭಾಯ್..
ಪ್ರತ್ಯುತ್ತರಅಳಿಸಿಮಸ್ತ್ ಆಗಿದೆ..
ಕಿಕ್ ಹೊಡಿತು... "ಕುಡುಕನ" ಉವಾಚ... !!
ಹ್ಹಹ್ಹಹ್ಹ... ಕುಡುಕನ ಮತ್ತೇ ಗಮ್ಮತ್ತೂ ಅಲ್ವಾ ಪ್ರಕಾಶಣ್ಣ. ನಿಮ್ಮ ಒಲುಮೆಗೆ ಚಿಯರ್ಸೂ...
ಅಳಿಸಿವಿಸ್ಕಿಯಲ್ಲಿ ಬೆರೆತ ನೀರಿನಂತೆ ಅಲ್ಲಲ್ಲಿ ಕನ್ನಡದಲ್ಲಿ ಬೆರೆತ ಆಂಗ್ಲ ಪದಗಳು ಕಿಕ್ಕು ಹತ್ತಿಸುವಂತಿವೆ..
ಪ್ರತ್ಯುತ್ತರಅಳಿಸಿಹ್ಹಹ್ಹಹ್ಹ ಒಂತಾರಾ ನಿಮ್ಮ ಮಾತು ನಿಜ ದಿಲೀಪ್ ಸಾರ್. ಕನ್ನಡವೇ ಸತ್ಯ. ಇಂಗ್ಲೀಷು ಬರೀ ಮಿತ್ಯಾ..
ಅಳಿಸಿಬದರಿ ಸರ್ ಮದಿರೆಯ ಮತ್ತು ಮನದನ್ನೆಯ ಅಮಲಿನ ಕಲ್ಪನೆಯನ್ನ ನಲ್ಲಿ ನೀರಲ್ಲಿ ಮಜವಾಗಿ ಬೆರೆಸಿದ್ದೀರಿ.. ಚೆನ್ನಾಗಿದೆ..
ಪ್ರತ್ಯುತ್ತರಅಳಿಸಿadE nanna guriyaagittu :)
ಅಳಿಸಿಅಸಲು ನೀರಿನದೇ ತಪ್ಪು
ಪ್ರತ್ಯುತ್ತರಅಳಿಸಿವಿಸ್ಕಿಗಾದರೂ ಅದೇ ರಮ್ಮಿಗಾದರೂ ಅದೇ
ಮಿಳಿತ ಮನದೆನ್ನೆಯಂತೆ,
ಅಮಲಿನಸಲು ಹಾಟಲ್ಲವೇ ಅಲ್ಲ
ಗ್ಯಾರಂಟಿ ಅದು ನಲ್ಲಿ ನೀರೇ!
WOW....!!! Sharanu sir... Chaliya belagallondu HOT kavite odide..:)
ಧನ್ಯವಾದಗಳು
ಅಳಿಸಿingella aytada kudadaga . yavaniggottu :) enadru aagli napkin waste madilvalla kushi aytu :)
ಪ್ರತ್ಯುತ್ತರಅಳಿಸಿಅದೇ ಕಾಣಪ್ಪ ಕುಡುಕನ ಇಸೇಸತೆ ನ್ಯಾಪ್ಕಿನನ್ನೂ ಅವ ವೇಸ್ಟ್ ಮಾಡೋಹಂಗಿಲ್ಲ. ನನ್ನ ಕವನ ಓದಿ ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು.
ಅಳಿಸಿಅ..ಣ್ನೋ ಏಏಏನ್ ಚೆಚೆನ್ನಾಆಆಗಿ ಬರ್ದ್ ಬರ್ದದಿರಿ... ಥೂ ಬಲೆ ಬಲೆ,,ಕಿಕ್ ಅತ್ತ್ ಬುಟ್ಟಯೈತೆ ಮಾತ್ ತೋ ದಲ್ತೈತೆ...
ಪ್ರತ್ಯುತ್ತರಅಳಿಸಿಕುಡಿದಾಗ ಒಳಗಿರುವ ಎಲ್ಲ ಸತ್ಯಗಳು ಹೊರ ಬರುವುದಲ್ಲದೇ ಪುಕ್ಕಲ ಕೂಡ ರಾಜಾರೋಷವಾಗಿ ಮಾತಾಡ್ತಾನಂತೆ... :D
ಪ್ರತ್ಯುತ್ತರಅಳಿಸಿಮೊದಲ ಸಿಪ್ಪಿಗೂ ಮುನ್ನ
ಭಯಗ್ರಸ್ತ ತಳಮಳ ಒಳಗೆ
ಕರುಳು ಸುಟ್ಟೀತೆ ಎಂಬಿತ್ಯಾದಿ,
ಇಳಿದಂತೆ ಒಳಗೆ ಮಗಾ
ಯಾವನಾ ಸೀ.ಎಂಊ ಈಗ?
ಈ ಸನ್ನಿವೇಶವನ್ನು ಸುಮಾರು ಮೂವೀಗಳಲ್ಲಿ ಕಂಡಿದೀವಿ. ಮೇಲಿನ ಸಾಲುಗಳು ಹಿಡಿಸಿದವು.